• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ರಾಜಕೀಯ

ಡಬಲ್ ಎಂಜಿನ್ ಸರ್ಕಾರ ಎಂದರೆ ಯಾವುದು? ಅದು ಹೇಗಿರುತ್ತದೆ?

by Dynamic Leader
30/04/2023
in ರಾಜಕೀಯ
0
0
SHARES
0
VIEWS
Share on FacebookShare on Twitter

ಡಿ.ಸಿ.ಪ್ರಕಾಶ್ ಸಂಪಾದಕರು

ಬಿಜೆಪಿಯವರು ಪದೇ ಪದೇ ‘ಡಬಲ್ ಎಂಜಿನ್ ಸರ್ಕಾರ; ಡಬಲ್ ಎಂಜಿನ್ ಸರ್ಕಾರ’ ಎಂದು ಹೇಳುತ್ತಿರುವುದನ್ನು ನಾವೆಲ್ಲರು ಕೇಳಿದ್ದೇವೆ. “ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ; ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ; ಅದರಿಂದ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದ್ದರಿಂದ ‘ಡಬಲ್ ಎಂಜಿನ್ ಸರ್ಕಾರ’ ಮುಂದುವರಿಯಲು ಬಿಜೆಪಿಯನ್ನು ಬೆಂಬಲಿಸಿ” ಎಂದು ಅದರ ನಾಯಕರು ಹೇಳುತ್ತೀದ್ದಾರೆ.

ಉದಾಹರಣೆಗೆ: ನೀವೆ ಹೇಳಿ, ಜೋಡೆತ್ತಿನ ಬಂಡಿಯಲ್ಲಿ ಎರಡು ಎತ್ತುಗಳು ಸಮಾನವಾದ ತೂಕದಲ್ಲಿರಬೇಕು. ಒಂದು ಗಟ್ಟಿಯಾಗಿ ಮತ್ತೊಂದು ಸಡಿಲವಾಗಿದ್ದರೆ ಅಥವಾ ಒಂದು ಎತ್ತು ಎತ್ತರಕ್ಕೆ ಮತ್ತೊಂದು ಕುಳ್ಳಗೆ ಇದ್ದರೆ ಬಂಡಿ ಓಡುತ್ತೆ? ಕೇಂದ್ರ ಸರ್ಕಾರದ ಎಂಜಿನ್ ಬೇರೆ; ರಾಜ್ಯ ಸರ್ಕಾರಗಳ ಎಂಜಿನೇ ಬೇರೆ. ಕೇಂದ್ರಾಡಳಿತ ಪ್ರದೇಶಗಳ ಎಂಜಿನ್‌ಗಳು ಇದಕ್ಕಿಂತ ಬಿನ್ನವಾದದ್ದು. ಕೇಂದ್ರ ಸರ್ಕಾರದ ಎಂಜಿನ್ 500 ಸಿಸಿ ಆದರೆ, ರಾಜ್ಯ ಸರ್ಕಾರಗಳ ಇಂಜಿನ್ 200 ಸಿಸಿ. ಕೇಂದ್ರಾಡಳಿತ ಪ್ರದೇಶಗಳ ಎಂಜಿನ್ ಬರೀ 100 ಸಿಸಿ ಮಾತ್ರ. ಎಲ್ಲವೂ ಗಾಡಿಗಳೇ ಎಲ್ಲಾ ಗಾಡಿಗಳಿಗೂ ಎಂಜಿನ್ ಇದೆ. ಆದರೆ ಒಂದಕ್ಕೊಂದು ಹೊಲಿಕೆಯಾಗುವುದಿಲ್ಲ. ಅದರದ್ದೇ ಆದ ವಿಶೇಷತೆಗಳು ಇರುತ್ತದೆ. ಒಂದು ಗಾಡಿ ರಿಪೇರಿ ಆದಾಗ, ಮತ್ತೊಂದು ಗಾಡಿಯಿಂದ ಅದನ್ನು ಎಳೆದುಕೊಂಡು ಅಥವಾ ತಳ್ಳಿಕೊಂಡು ಹೋಗಿ ನಿರ್ದಿಷ್ಟವಾದ ಜಾಗಕ್ಕೆ ಸೇರಿಸಬಹುದು. ಆದರೆ ವಿಭಿನ್ನವಾದ ಎರಡು ಗಾಡಿಗಳನ್ನು ಒಂದಾಗಿ ಜೋಡಿಸಿ, ಅದರ ಮೇಲೆ ಕೇಂದ್ರವು ಸವಾರಿ ಮಾಡುತ್ತದೆ ಎಂದರೆ ಅದು ಸಾದ್ಯವಿಲ್ಲ. ಅದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ; ಪ್ರಜಾಪ್ರಭುತ್ವ ಅದನ್ನು ಒಪ್ಪುವುದೂ ಇಲ್ಲ.

ನೆನೆಪಿರಲಿ: ಬಿಜೆಪಿಯ ‘ಒಂದು ದೇಶ ಒಂದೇ ಧರ್ಮ’, ‘ಒಂದು ದೇಶ ಒಂದೇ ಭಾಷೆ’, ಒಂದು ದೇಶ ಒಂದೇ ಚುನಾವಣೆ’ ಮಾದರಿಯಲ್ಲಿ ‘ಒಂದು ದೇಶ ಒಂದೇ ಪಕ್ಷ’ ವೆಂಬ ರಾಜಕೀಯ ಘೋಷನೆಗೆ ಮತ್ತೊಂದು ಅಡ್ಡ ಹೆಸರೇ ‘ಡಬಲ್ ಎಂಜಿನ್ ಸರ್ಕಾರ’. ಈ ಡಬಲ್ ಎಂಜಿನ್ ಸರ್ಕಾರದ ಅಂತಿಮ ಗುರಿಯೇ ಏಕ ನಾಯಕತ್ವದ ಹಿಂದೂ ಬಿಜೆಪಿ ಸರ್ವಾಧಿಕಾರ ಆಡಳಿತ. ಅದರ ಉದ್ದೇಶ ಅಖಂಡ ಭಾರತವೆಂಬ ಹಿಂದೂ ರಾಷ್ಟ್ರ. ಭಾರತವು ಅನೇಕ ರಾಜ್ಯಗಳ ರಾಷ್ಟ್ರವಾಗಿದೆ. ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂಬ ತತ್ವವನ್ನು ತರಲು ಇಲ್ಲಿ ಸಾಧ್ಯವಿಲ್ಲ. 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ಹಾಗೂ ವೈವಿಧ್ಯಮಯ ಸಾಮಾಜಿಕ ಸಂಸ್ಕೃತಿಗಳನ್ನು ಹೊಂದಿರುವ ಭಾರತದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫೆಡರಲ್ ರಚನೆಯ ಆಧಾರದ ಮೇಲೆ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡಬೇಕು. ಅದನ್ನು ಬಿಟ್ಟು, ಡಬಲ್ ಎಂಜಿನ್ ಸರ್ಕಾರದ ಹೆಸರಿನಲ್ಲಿ ಒಂದು ದೇಶ ಒಂದೇ ಪಕ್ಷವನ್ನು ಜಾರಿಗೊಳಿಸಲು ಮುದಾಗುವುದು ಸಮಯ ವ್ಯರ್ಥ. “ರಾಜ್ಯದಲ್ಲಿ ಸ್ವಾಯತ್ತ ಸರ್ಕಾರ ಕೇಂದ್ರದಲ್ಲಿ ಸಂಯುಕ್ತ ಸರ್ಕಾರ” ಎಂಬುದೇ ನಮ್ಮ ಘೋಷಣೆಯಾಗಬೇಕು; ಅದುವೇ ನಮಗೆ ಶ್ರೀರಕ್ಷೆ.

ಡಬಲ್ ಎಂಜಿನ್ ಸರ್ಕಾರಕ್ಕೆ ಮತ್ತೊಂದು ಅರ್ಥವಿದೆ: ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಸರ್ಕಾರ ಇದ್ದರೆ ಅದಕ್ಕೆ ಡಬಲ್ ಎಂಜಿನ್ ಸರ್ಕಾರ ಎಂದು ಕರೆಯಾಲಾಗುತ್ತದೆ. ಆದರೆ, ಅದಕ್ಕೆ ಮತ್ತೊಂದು ಅರ್ಥವಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಎರಡು ವಿಧದ ಮೂರ್ತಿಗಳು ಇರುತ್ತವೆ. ಒಂದು ‘ಮೂಲವರ್ ಮೂರ್ತಿ’ ಎಂದರೆ, ಗರ್ಭ ಗೃಹದಲ್ಲಿ ಯಾವಾಗಲೂ ಇರುವ ವಿಗ್ರಹ. ಮತ್ತು ‘ಉತ್ಸವ ಮೂರ್ತಿ’ ಎಂದರೆ, ಉತ್ಸವಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯುವ ವಿಗ್ರಹ. ಗರ್ಭ ಗೃಹದಲ್ಲೇ ಇರುವ ‘ಮೂಲವರ್ ಮೂರ್ತಿ’ ಗೃಹ ಸಚಿವ ಅಮಿತ್ ಶಾ ಅವರು ದೇಶವನ್ನು ಬಿಟ್ಟು ಎಲ್ಲೂ ಹೋಗದೆ, 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಕಾರ್ಯವೈಕರಿಯನ್ನು ನೋಡಿಕೊಂಡು, ಪಕ್ಷ ಬಲವರ್ಧನೆಗಾಗಿ ಮತ್ತು ಶತ್ರುಗಳನ್ನು ಹಾಗೂ ವಿರೋಧ ಪಕ್ಷಗಳ ನಾಯಕರುಗಳನ್ನು ಮಟ್ಟ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಸದಾ ಪ್ರವಾಸ ಮತ್ತು ಉತ್ಸವಗಳಲ್ಲೇ ಇರುವ ‘ಉತ್ಸವ ಮೂರ್ತಿ’ ಪ್ರಧಾನಿ ನರೇಂದ್ರ ಮೋದಿಯವರು, ದೇಶ, ವಿದೇಶ ಪ್ರವಾಸ, ಅಂತಾರಾಷ್ಟ್ರೀಯ ನಾಯಕರುಗಳ ಭೇಟಿ ಮತ್ತು ಮಾತುಕತೆ, ವರ್ಚುವಲ್ ಮೀಟಿಂಗ್, ಚುನಾವಣೆ ಪ್ರಚಾರ, ಉದ್ಘಾಟನೆ, ರೋಡ್ ಶೋ ಹಾಗೂ ಫೋಟೋ ಸೆಷನ್‌ಗಳಲ್ಲಿಯೇ ಬಿಸಿಯಾಗಿದ್ದಾರೆ. ಒಬ್ಬರು ಪಿಎಂ ಮತ್ತೊಬ್ಬರು ಸೂಪರ್ ಪಿಎಂ. ಒಬ್ಬರು ಪ್ರಜಾಪ್ರಭುತ್ವವಾದಿ  ಮತ್ತೊಬ್ಬರು ಸರ್ವಾಧಿಕಾರಿ. ಇವರಿಬ್ಬರೇ ಕೇಂದ್ರ ಸರ್ಕಾರದ ಡಬಲ್ ಎಂಜಿನ್. ಕೇಂದ್ರ ಸರ್ಕಾರವೇ ಡಬಲ್ ಎಂಜಿನ್ ಸರ್ಕಾರ.

Tags: Amit ShahDouble Engine GovernmentDynamic LeaderDynamic Leader MagazineDynamic Leader News PortalKarnataka Assembly Election 2023Karnataka BJPModi Road ShowMulavar MurthiNarendra ModiNarendra Modi RallyUtsav Murthiಅಮಿತ್ ಶಾಉತ್ಸವ ಮೂರ್ತಿಕರ್ನಾಟಕ ಬಿಜೆಪಿಕರ್ನಾಟಕ ವಿಧಾನಸಭೆ ಚುನಾವಣೆ 2023ಡಬಲ್ ಎಂಜಿನ್ ಸರ್ಕಾರನರೇಂದ್ರ ಮೋದಿ ರೋಡ್ ಶೋಮೂಲವರ್ ಮೂರ್ತಿ
Previous Post

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ದ್ವೇಷಾಸೂಯ ರಾಜಕಾರಣದ ಬಗ್ಗೆ ಸಿದ್ದರಾಮಯ್ಯ ಕಿಡಿ!

Next Post

ದೇಶಕ್ಕಾಗಿ ರಾಹುಲ್ ಗಾಂಧಿ ಪ್ರಾಣ ಕೊಡಲೂ ಸಿದ್ಧ: ಪ್ರಿಯಾಂಕಾ ಗಾಂಧಿ

Next Post

ದೇಶಕ್ಕಾಗಿ ರಾಹುಲ್ ಗಾಂಧಿ ಪ್ರಾಣ ಕೊಡಲೂ ಸಿದ್ಧ: ಪ್ರಿಯಾಂಕಾ ಗಾಂಧಿ

Stay Connected test

  • 24k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025

Harvest Festival: ಕೊತ್ತನೂರು CSI ಸಭೆಯಲ್ಲಿ ಅದ್ದೂರಿಯಾಗಿ ನಡೆದ ಸುಗ್ಗಿ ಉತ್ಸವ!

13/10/2025

ಕೆ.ಆರ್.ಪುರಂ ಕ್ಷೇತ್ರಕ್ಕೆ ಬಂದಿದ್ದ ಸುಮಾರು 5000 ಸಾವಿರ ಕೋಟಿ ರೂ.ಗಳು ಏನಾದವು? ಎಂದು ನನಗೆ ಯಕ್ಷ ಪ್ರಶ್ನೆಯಾಗಿದೆ: ಸಚಿವ ಬೈರತಿ ಸುರೇಶ್

28/10/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0

ಮತಗಳು ಬೇಕು, ನಾಯಕತ್ವ ಬೇಡವೇ? INDIA ಒಕ್ಕೂಟ, ರಾಹುಲ್ ಗಾಂಧಿಯ ಭಾಷಣ ಮತ್ತು ಪ್ರಾತಿನಿಧ್ಯದ ರಾಜಕೀಯದ ಉತ್ತರಿಸಲಾಗದ ಪ್ರಶ್ನೆಗಳು.

16/06/2026

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

Recent News

ಮತಗಳು ಬೇಕು, ನಾಯಕತ್ವ ಬೇಡವೇ? INDIA ಒಕ್ಕೂಟ, ರಾಹುಲ್ ಗಾಂಧಿಯ ಭಾಷಣ ಮತ್ತು ಪ್ರಾತಿನಿಧ್ಯದ ರಾಜಕೀಯದ ಉತ್ತರಿಸಲಾಗದ ಪ್ರಶ್ನೆಗಳು.

16/06/2026

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಆರೋಗ್ಯ
  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಮತಗಳು ಬೇಕು, ನಾಯಕತ್ವ ಬೇಡವೇ? INDIA ಒಕ್ಕೂಟ, ರಾಹುಲ್ ಗಾಂಧಿಯ ಭಾಷಣ ಮತ್ತು ಪ್ರಾತಿನಿಧ್ಯದ ರಾಜಕೀಯದ ಉತ್ತರಿಸಲಾಗದ ಪ್ರಶ್ನೆಗಳು.

16/06/2026

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS