• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ರಾಜಕೀಯ

ಕೆ.ಆರ್.ಪುರಂನಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಸೇರ್ಪಡೆ: ಡಿ.ಕೆ.ಮೋಹನ್ ಬಾಬು ನೇತೃತ್ವದಲ್ಲಿ ಕಾರ್ಯಕ್ರಮ – ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ

ಬಹುಶಃ ಭಗವಂತ ಇದ್ದಾನೋ ಇಲ್ವೋ ಯಾರಿಗೂ ಗೊತ್ತಿಲ್ಲ. ಆದರೆ ಕರ್ಮ ಅನ್ನೋದೊಂದು ಇದೆ. ಯಾರು ಅತಿಯಾಗಿ ಏನಾದರೂ ಮಾಡ್ತಾರೋ ಅವರಿಗೆ (ಬೈರತಿ ಬಸವರಾಜ) ಎಲ್ಲೋ ಒಂದು ಕಡೆ ಶಿಕ್ಷೆ ಆಗಿಯೇ ಆಗುತ್ತೆ.

by Dynamic Leader
25/04/2026
in ರಾಜಕೀಯ
0
0
SHARES
0
VIEWS
Share on FacebookShare on Twitter

ಡಿ.ಸಿ.ಪ್ರಕಾಶ್, ಸಂಪಾದಕರು 

ಸಾರಾಂಶ: ಬೆಂಗಳೂರು ಕೆ.ಆರ್.ಪುರಂ ಕ್ಷೇತ್ರದ ಹೊರಮಾವು ಅಗರ ವಾರ್ಡ್-2ರಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮುಖಂಡರು, ವಿಶೇಷವಾಗಿ ಮಹಿಳಾ ನಾಯಕರು ಕಾಂಗ್ರೆಸ್ ಸೇರ್ಪಡೆಯಾದರು. ಡಿ.ಕೆ.ಮೋಹನ್ ಬಾಬು ಬಿಜೆಪಿ ಮತ್ತು ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಪ್ರಜಾಪ್ರಭುತ್ವದಲ್ಲಿ ಭಯ ಬೇಡ, ಹಕ್ಕುಗಳಿಗಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ಹೊರಮಾವು ಅಗರ ವಾರ್ಡ್-2 ರಲ್ಲಿ, ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಮೋಹನ್ ಬಾಬು ಅವರ ನೇತೃತ್ವದಲ್ಲಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಹೊರಮಾವು ಅಗರ ವಾರ್ಡ್ ನಂ.2ರ BECC-GBA ಚುನಾವಣೆಯ ಪ್ರಬಲ ಆಕಾಂಕ್ಷಿಯೂ ಆಗಿರುವ ಅಗರ ಪ್ರಕಾಶ್ ಅವರ ಮುಖಂಡತ್ವದಲ್ಲಿ ನೆನ್ನೆ ಬೇರೆ ಪಕ್ಷಗಳನ್ನು ತೊರೆದ ನೂರಾರು ಮುಖಂಡರು ವಿಷೇಶವಾಗಿ ಮಹಿಳಾ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಮೋಹನ್ ಬಾಬು ಅವರು, “ನೀವೆಲ್ಲಾ ಇಲ್ಲಿ ಸೇರಿರೋದೆ ದೊಡ್ದ ಸಾಧನೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾನು ನಿಮ್ಮನ್ನೆಲ್ಲ ಭೇಟಿಯಾಗಲು ಸಾಧ್ಯ ಆಗಲಿಲ್ಲ. ನನಗೆ ಸಿಕ್ಕಿದ್ದು ಕಡಿಮೆ ಸಮಯ. ಬಹಳಷ್ಟು ಜನ ಆ ಸಂದರ್ಭದಲ್ಲಿ ನಮ್ಮೊಂದಿಗೆ ಇರಲಿಲ್ಲ. ಆ ಕಾರಣದಿಂದ ಈ ಭಾಗದಲ್ಲಿ ನನಗೆ 12 ಸಾವಿರ ಮತಗಳು ಮೈನಸ್ ಆದವು. ಆ ಸಮಯದಲ್ಲಿ ನಮ್ಮೊಂದಿಗೆ ಇದ್ದಿದ್ದು ವೆಂಕಟೇಶ್, ಪ್ರಕಾಶ್, ಕ್ಯಾಲಸನಹಳ್ಳಿ ಶ್ರೀನಿವಾಸ್, ವಿನೋದ್, ಪ್ರಸನ್ನ, ಗಂಗಾಧರ್, ಸುನಿಲ್ ಮುಂತಾದವರಷ್ಟೆ ನಮ್ಮೊಂದಿಗೆ ಇದ್ದರು. ಬಹುಶಃ ನೀವೆಲ್ಲಾ ಇದ್ದಿದ್ದರೆ ನಾನು ಸುಲುಭವಾಗಿ ಗೆದ್ದುಬಿಡುತ್ತಿದ್ದೆ” ಎಂದು ಹೇಳಿದರು.

“ಚುನಾವಣೆಯ ಸಂದರ್ಭದಲ್ಲಿ ವೆಂಕಟೇಶ್, ಪ್ರಕಾಶ್ ಅವರು ಬಂದು ‘ಅಣ್ಣಾ ಯಾರೂ ಬರ್ತಾ ಇಲ್ಲ ಭಯ ಬೀಳ್ತಾ ಇದ್ದಾರೆ’ ಅಂತ ಹೇಳಿದಾಗ ನನಗೆ ಆಶ್ಚರ್ಯ ಆಯಿತು. ಓಟು ಹಾಕೋದು ಬಿಡೋದು – ಗೆಲ್ಲೋದು ಸೋಲೋದು ಅದು ಬೇರೆ. Entirely Different. ಆದರೆ, ನನಗೆ ಬೇಕಾಗಿರುವವರ ಜೊತೆಯಲ್ಲಿ ಓಡಾಡಕ್ಕೆ ಆಗೋದಿಲ್ಲ.. ನನಗೆ ಬೇಕಾಗಿರುವವರ ಜೊತೆಯಲ್ಲಿ ಮಾತನಾಡಕ್ಕೆ ಆಗೋದಿಲ್ಲ.. ನನಗೆ ಬೇಕಾಗಿರುವವರಿಂದ ಓಟು ಹಾಕಿಸಿಕೊಳ್ಳಕ್ಕೆ ಆಗೋದಿಲ್ಲ ಎಂದರೆ ಅರ್ಥ ಏನು” ಎಂದು ಪ್ರಶ್ನಿಸಿದರು.

“ನಾವು ಭಾರತದಂತ ಪ್ರಜಾ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹುಟ್ಟಿದ್ದೇವೆ. ದೇಶದ ಎಲ್ಲಾ ಭಾಗದ ಜನರೂ ಇಲ್ಲಿ ವಾಸವಾಗಿದ್ದಾರೆ. ಇದು ಮೆಟ್ರೋಪಾಲಿಟನ್ ಸಿಟಿ. ಇಂತಹ ವಿಶ್ವ ಪ್ರಖ್ಯಾತಿ ಬೆಂಗಳೂರಿನಲ್ಲಿ ಇದ್ದುಕೊಂಡು, ಐಟಿ ಸೆಕ್ಟರ್ ನಂತಹ ಜಾಗದಲ್ಲಿ ಇದ್ದುಕೊಂಡು ಬೇರೊಬ್ಬರಿಗೆ (ಬೈರತಿ ಬಸವರಾಜ) ಭಯ ಬೀಳ್ತಾರೆ ಅಂದರೆ ನಿಜವಾಗಲು ಆಶ್ಚರ್ಯವಾಗಿದೆ. ಯಾವ ಮಟ್ಟದಲ್ಲಿ ಈ ಭಾಗವನ್ನು ಅವರು ಮಾಡುತ್ತಿದ್ದಾರೆ. ಯಾವ ಮಟ್ಟದಲ್ಲಿ ಅವರು ಆ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದರೆ, ಬಹುಶಃ ಭಗವಂತ ಇದ್ದಾನೋ ಇಲ್ವೋ ಯಾರಿಗೂ ಗೊತ್ತಿಲ್ಲ. ಆದರೆ ಕರ್ಮ ಅನ್ನೋದೊಂದು ಇದೆ. ಯಾರು ಅತಿಯಾಗಿ ಏನಾದರೂ ಮಾಡ್ತಾರೋ ಅವರಿಗೆ ಎಲ್ಲೋ ಒಂದು ಕಡೆ ಶಿಕ್ಷೆ ಆಗಿಯೇ ಆಗುತ್ತೆ. ಅವರು ಜೈಲಿಗೆ ಹೋಗಿದ್ದಾರೆ ಎಂದರೆ ಅದಕ್ಕೆ ಇನ್ನೇನು ಕಾರಣ? ಇಷ್ಟು ಅಧಿಕಾರದಲ್ಲಿದ್ದು, ಇಷ್ಟು ಐಶ್ವರ್ಯ ಇಟ್ಟುಕೊಂಡು.. ಇಷ್ಟು ಸಂಪತ್ತನ್ನು ಇಟ್ಟೊಂಡು.. ಇಷ್ಟು ಜನರನ್ನು ಜೊತೆ ಇಟ್ಕೊಂಡು.. ಇವತ್ತು ಕರ್ಮ ಬಿಟ್ಟಿದೆಯ ಅವರನ್ನ. ನಾವು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು” ಎಂದು ಕಿಡಿಕಾರಿದರು.

“ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಯಾರ ಹಕ್ಕುನ್ನೂ ನಾವು ಕಿತ್ತುಕೊಳ್ಳಬಾರದು. ಪ್ರೀತಿಯನ್ನು ಗೆಲ್ಲಬೇಕು. ಪ್ರೀತಿಯಿಂದ ಯಾರನ್ನದರೂ ಮಾತನಾಡಿಸಬಹುದು. ನನ್ನ ಮನಸ್ಸಿಗೆ ಯಾರ ಜೊತೆಗೆ ಹೋಗಬೇಕೆಂದು ಇಷ್ಟ ಇದೆಯೋ ಅವರ ಜೊತೆ ಹೋಗಿ ನಮ್ಮ ಹಕ್ಕು” ಎಂದರು.

“ಕಳೆದ 13 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಹಲಾವಾರು ಪ್ರಕಟಣೆಗಳನ್ನು ಮಾಡಿದರು. ರೂಪಾಯಿಯ ಮೌಲ್ಯ ಹೆಚ್ಚು ಮಾಡುತ್ತೇನೆ, ಡಾಲರ್ ಗೆ ಸರಿ ಸಮಾನವಾಗಿ ಮಾಡುತ್ತೇನೆ ಎಂದರು ಆಯ್ತಾ? ಎಲ್ಲರಿಗೂ ಉದ್ಯೋಗ.. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತಿನಿ ಎಂದರು ಕೊಟ್ಟಿದ್ದಾರಾ? ಇವತ್ತು ಎಷ್ಟು ನಿರುದ್ಯೋಗಿಗಳಿದ್ದಾರೆ? ಇವತ್ತು ಎಷ್ಟು ಇಂಡಿಸ್ಟ್ರೀಯಲ್ ಗಳು ಮುಚ್ಚುವಂತ ಪರಿಸ್ಥಿತಿಗೆ ಹೋಗಿವೆ? ಸ್ಮಾರ್ಟ್ ಸಿಟಿ ಮಾಡ್ತಿವಿ ಎಂದರು ಮಾಡಿಲ್ಲ. ಬುಲೆಟ್ ಟ್ರೈನ್ ಬಿಡ್ತಿವಿ ಎಂದರು ಬಿಟ್ಟಿದ್ದಾರಾ? ಪೆಟ್ರೋಲ್-ಗ್ಯಾಸ್ ಬೆಲೆ ಕಡಿಮೆ ಮಾಡ್ತಿನಿ ಎಂದರು ಎಲ್ಲಿ ಮಾಡಿದ್ದಾರೆ. ದಿನನಿತ್ಯ ಬಳಕೆಯಾಗುವ ಸಾಮಗ್ರಿಗಳ ಬೆಲೆ ಕಡಿಮೆ ಮಾಡ್ತಿವಿ ಎಂದರು ಮಾಡಿದ್ದಾರಾ? ಮೋದಿ ಅವರು ಚುನಾವಣೆಗೆ ಮುಂಚೆ ಹೇಳಿದ ಒಂದನ್ನಾದರು ಈಡೇರಿಸಿದ್ದಾರಾ? ಒಂದೂ ಮಾಡಿಲ್ಲ. ಅವರಿಂದ ಒಂದೇ ಒಂದನ್ನು ಮಾಡಲು ಸಾಧ್ಯ ಸುಳ್ಳನ್ನು ಬಹಳ ಚೆನ್ನಾಗಿ ಹೇಳುವುದು. ಮತ್ತು ಆಸೆ ತೋರಿಸುವುದು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೊರಮಾವು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸಿ.ವೆಂಕಟೇಶ್, ಹೊರಮಾವು ಅಗರ ವಾರ್ಡ್ ನಂ.2ರ BECC-GBA ಚುನಾವಣೆಯ ಪ್ರಬಲ ಆಕಾಂಕ್ಷಿಯಾದ ಅಗರ ಪ್ರಕಾಶ್, ಹಿರಿಯ ಕಾಂಗ್ರೆಸ್ ಮುಖಂಡರಾದ ಕ್ಯಾಲಸನಹಳ್ಳಿ ಶ್ರೀನಿವಾಸ್, ಹೆಚ್.ಕೆ.ಸುರೇಶ್, ಎಂ.ಎಸ್.ಗುರುದಾಸ್, ಪುರುಷೋತ್ತಮ ಬಾಬು, ಹೊರಮಾವು ವಾರ್ಡ್ ಅಧ್ಯಕ್ಷ ಪ್ರಸನ್ನ, ಕಲ್ಕರೆ ವಾರ್ಡ್ ಅಧ್ಯಕ್ಷ ಸುನಿಲ್, ರಾಕೇಶ್ ರೆಡ್ಡಿ, ಗಂಗಾದರ್ ರೆಡ್ಡಿ, ದೇವರಾಜು, ಟಿ.ಎನ್.ಬಲವಂತ್ ಹಾಗೂ ಶಫಿ ಇನ್ನಿತರರು ಭಾಗವಹಿಸಿದ್ದರು.

Tags: BECC Electionಕಾಂಗ್ರೆಸ್ಕೆ.ಆರ್.ಪುರಂಜಿಬಿಎ ಚುನಾವಣೆಪಕ್ಷ ಸೇರ್ಪಡೆಬಿಜೆಪಿಬೈರತಿ ಬಸವರಾಜವಾಗ್ದಾಳಿ
Previous Post

ಶಬರಿಮಲೆ ಪ್ರಕರಣ: 9 ನ್ಯಾಯಾಧೀಶರ ಮುಂದೆ ಚರ್ಚಿಸಲಾಗುತ್ತಿರುವ 7 ಪ್ರಶ್ನೆಗಳು ಯಾವುವು? – ಪೂರ್ಣ ವಿವರ ಇಲ್ಲಿದೆ!

Next Post

ಒಳಮೀಸಲಾತಿಯನ್ನು ಒಳಗೊಂಡ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಿ: ಸರ್ಕಾರಕ್ಕೆ KDSS ಆಗ್ರಹ!

Next Post

ಒಳಮೀಸಲಾತಿಯನ್ನು ಒಳಗೊಂಡ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಿ: ಸರ್ಕಾರಕ್ಕೆ KDSS ಆಗ್ರಹ!

Stay Connected test

  • 24k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025

Harvest Festival: ಕೊತ್ತನೂರು CSI ಸಭೆಯಲ್ಲಿ ಅದ್ದೂರಿಯಾಗಿ ನಡೆದ ಸುಗ್ಗಿ ಉತ್ಸವ!

13/10/2025

ಕೆ.ಆರ್.ಪುರಂ ಕ್ಷೇತ್ರಕ್ಕೆ ಬಂದಿದ್ದ ಸುಮಾರು 5000 ಸಾವಿರ ಕೋಟಿ ರೂ.ಗಳು ಏನಾದವು? ಎಂದು ನನಗೆ ಯಕ್ಷ ಪ್ರಶ್ನೆಯಾಗಿದೆ: ಸಚಿವ ಬೈರತಿ ಸುರೇಶ್

28/10/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಆರೋಗ್ಯ
  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS