• About
  • Advertise
  • Privacy & Policy
  • Contact
Dynamic Leader | ಡೈನಾಮಿಕ್ ಲೀಡರ್
Advertisement
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ
No Result
View All Result
Dynamic Leader | ಡೈನಾಮಿಕ್ ಲೀಡರ್
No Result
View All Result
Home ಸಿನಿಮಾ

ಮೋದಿ ಸರ್ಕಾರದ ಮುಂದಿನ ರಾಜಕೀಯ ಅಸ್ತ್ರ ಸೆನ್ಸಾರ್ ಬೋರ್ಡ್: ವಿಜಯ್ ಪರವಾಗಿ ಕಾಂಗ್ರೆಸ್ ಸಂಸದರಿಂದ ಧ್ವನಿ!

ಸೆನ್ಸಾರ್ ಮಂಡಳಿಯನ್ನು ವಿಸರ್ಜಿಸಬೇಕು. ಅಲ್ಲಿಯವರೆಗೆ, ಅದನ್ನು ರಾಜಕೀಯ ಅಸ್ತ್ರವಾಗಿ ಬಳಸುವುದನ್ನು ನಾವು ಬಲವಾಗಿ ವಿರೋಧಿಸಬೇಕು.

by Dynamic Leader
08/01/2026
in ಸಿನಿಮಾ
0
0
SHARES
0
VIEWS
Share on FacebookShare on Twitter

◾ ಡಿ.ಸಿ.ಪ್ರಕಾಶ್ 

ವಿಜಯ್ ತಮ್ಮ ಕೊನೆಯ ಚಿತ್ರ ‘ಜನನಾಯಗನ್’ ಜನವರಿ 9 ರಂದು ಪೊಂಗಲ್ ಹಬ್ಬದಂದು ಬಿಡುಗಡೆಯಾಗುವುದಾಗಿ ಘೋಷಿಸಿದ್ದರು. ಆದರೆ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಗುವುದು ವಿಳಂಬವಾದ ಕಾರಣ, ನಿರ್ಮಾಣ ಕಂಪನಿಯು ನ್ಯಾಯಾಲಯದಲ್ಲಿ ತುರ್ತು ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಿನ್ನೆ ನಡೆದಿತ್ತು. ನ್ಯಾಯಾಧೀಶೆ ಪಿ.ಡಿ.ಉಷಾ ಅವರು ಜನವರಿ 9 ರಂದು ಈ ಪ್ರಕರಣದ ತೀರ್ಪು ಪ್ರಕಟಿಸುವುದಾಗಿ ಘೋಷಿಸಿದ್ದರು.

ಇದರ ಬೆನ್ನಲ್ಲೇ, ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್, ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡುವುದಾಗಿ ಘೋಷಿಸಿದೆ.

ನಟ ವಿಜಯ್

ಕೆಲವರು ಇದನ್ನು ರಾಜಕೀಯ ಸೇಡಿನ ಕೃತ್ಯ ಎಂದು ಟೀಕಿಸುತ್ತಿದ್ದರೆ, ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಕೂರ್, ಸಂಸದ ಜ್ಯೋತಿಮಣಿ ಮತ್ತು ನಾಮ್ ತಮಿಳರ್ ಪಕ್ಷದ ನಾಯಕ ಸೀಮಾನ್ ವಿಜಯ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಸಿನಿಮಾ ಕ್ಷೇತ್ರವೂ ಸರ್ಕಾರದ ಹಿಡಿತಕ್ಕೆ ಸಿಲುಕಿದೆ’ – ಮಾಣಿಕಂ ಠಾಕೂರ್
ಈ ಕುರಿತು ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಕೂರ್ ಅವರು ‘ಎಕ್ಸ್’ (ಟ್ವಿಟರ್) ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ,
“ಆರ್‌ಎಸ್‌ಎಸ್‌ ತತ್ವಾಧಾರಿತ ಚಿತ್ರಗಳು ಜನರ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾದಾಗ, ಅದನ್ನು ಆತ್ಮವಿಶ್ವಾಸದಿಂದ ಎದುರಿಸುವ ಬದಲು, ಮೋದಿ-ಶಾ ಸರ್ಕಾರ ತನ್ನ ಅಧಿಕಾರವನ್ನು ಬಳಸುತ್ತದೆ. ಆ ರೀತಿಯಲ್ಲಿ, ಸಿನಿಮಾ ಉದ್ಯಮ ಕೂಡ ಈಗ ಅವರ ಕೈಯಲ್ಲಿ ಸಿಲುಕಿಕೊಂಡಿದೆ.” ಎಂದು ಆರೋಪಿಸಿದ್ದಾರೆ.

“ಭಾರತದ ಸಂವಿಧಾನದ 19(1)(a) ಕಲಂನಡಿ ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭರವಸೆ ನೀಡಲಾಗಿದೆ. ಆದರೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರ ಅಧೀನದಲ್ಲಿ ಈ ಸ್ವಾತಂತ್ರ್ಯ ದಿನದಿಂದ ದಿನಕ್ಕೆ ಹತ್ತಿಕ್ಕಲ್ಪಡುತ್ತಿದೆ” ಎಂದು ಅವರು ಟೀಕಿಸಿದ್ದಾರೆ.

ಸಂಸದ ಮಾಣಿಕ್ಕಂ ಠಾಕೂರ್

“ಸಾಮಾನ್ಯವಾಗಿ ವಿರೋಧಿಗಳನ್ನು ಮೌನಗೊಳಿಸಲು ಇ.ಡಿ, ಸಿಬಿಐ, ಆದಾಯ ತೆರಿಗೆ ಇಲಾಖೆಗಳನ್ನು ಬಳಸಲಾಗುತ್ತದೆ. ಈಗ ಅದೇ ಸಾಲಿಗೆ ಸೆನ್ಸಾರ್ ಬೋರ್ಡ್ ಕೂಡ ಸೇರಿದೆ. ಇದರ ಮೂಲಕ ಸಿನಿಮಾ ಮತ್ತು ಅದರ ಆಲೋಚನೆಗಳನ್ನು ನಿಯಂತ್ರಿಸಲು ಪ್ರಯತ್ನ ನಡೆಯುತ್ತಿದೆ. ಕಲೆ ಅಧಿಕಾರದ ಮುಂದೆ ಮಣಿದಾಗ, ಪ್ರಜಾಪ್ರಭುತ್ವ ಎಂದಿಗೂ ಉಳಿಯುವುದಿಲ್ಲ” ಎಂದು ವಿಜಯ್ ಪರವಾಗಿ ಅವರು ಧ್ವನಿ ಎತ್ತಿದ್ದಾರೆ.

‘ಇದು ತಮಿಳು ಚಿತ್ರರಂಗದ ಮೇಲಿನ ದಾಳಿ’ – ಸಂಸದೆ ಜ್ಯೋತಿಮಣಿ
ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಅವರು ತಮ್ಮ ಹೇಳಿಕೆಯಲ್ಲಿ, “ಇದು ತಮಿಳು ಚಲನಚಿತ್ರೋದ್ಯಮದ ಮೇಲಿನ ದಾಳಿ. ರಾಜಕೀಯ ಪಕ್ಷಗಳು, ಇಷ್ಟಾನಿಷ್ಟಗಳು ಏನೇ ಇರಲಿ, ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರೂ ಇದನ್ನು ಖಂಡಿಸಬೇಕು. ನೂರಾರು ಜನರ ಶ್ರಮದಿಂದ, ಹಲವಾರು ಕೋಟಿ ರೂಪಾಯಿಗಳ ಹೂಡಿಕೆಯಿಂದ ಒಂದು ಚಿತ್ರ ನಿರ್ಮಾಣವಾಗುತ್ತದೆ.

ಅದನ್ನು ಈ ರೀತಿ ತಡೆಯಲು ಪ್ರಯತ್ನಿಸುವುದು ಸೃಜನಶೀಲ ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಮತ್ತು ರಾಜಕೀಯ ಕಾರಣಗಳಿಗಾಗಿ ಅದನ್ನು ನಿರ್ಬಂಧಿಸುವುದು ಇನ್ನೂ ಹೆಚ್ಚು ಅಪಾಯಕಾರಿ.

ಮೋದಿ ಸರ್ಕಾರದ ರಾಜಕೀಯ ಅಸ್ತ್ರ
ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯ ಜೊತೆಗೆ ಸೆನ್ಸಾರ್ ಬೋರ್ಡ್ ಕೂಡ ಮೋದಿ ಸರ್ಕಾರದ ರಾಜಕೀಯ ಅಸ್ತ್ರವಾಗಿದೆ. ನಾವು ಇದನ್ನು ನೋಡುತ್ತಾ ಮೌನವಾಗಿರಲು ಸಾಧ್ಯವಿಲ್ಲ. ನಾನು ಕೆಲವು ವರ್ಷಗಳ ಕಾಲ ಸೆನ್ಸಾರ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದೇನೆ. ಅದರ ಕಾರ್ಯಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಈ ತಾಂತ್ರಿಕ ಯುಗದಲ್ಲಿ, ಸೆನ್ಸಾರ್ ಮಂಡಳಿಯು ಹಳೆಯ ಸಂಸ್ಥೆಯಾಗಿದೆ.

ಸಂಸದೆ ಜ್ಯೋತಿಮಣಿ

ಒಂದು ಚಿತ್ರವನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಜನರಿಗೆ ಬಿಟ್ಟದ್ದು. ನಾವು ಒಂದು ಚಿತ್ರವನ್ನು ಸೆನ್ಸಾರ್ ಮಾಡುತ್ತಿರುವ ಅದೇ ಸಮಯದಲ್ಲಿ, ದೂರದರ್ಶನ, ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಸೆನ್ಸಾರ್ ಮಾಡದ ವಿಡಿಯೊಗಳು ಮತ್ತು ದೃಶ್ಯಾವಳಿಗಳು ಪ್ರಸಾರವಾಗುತ್ತಿವೆ.

ಇದನ್ನು ನಾವು ಬಲವಾಗಿ ವಿರೋಧಿಸಬೇಕು!
ಇದನ್ನು ಲಕ್ಷಾಂತರ ಜನರು ವೀಕ್ಷಿಸುತ್ತಿದ್ದಾರೆ. ವಾಸ್ತವವೆಂದರೆ ಈ ಸಂದರ್ಭದಲ್ಲಿ, ಚಿತ್ರವನ್ನು ಸೆನ್ಸಾರ್ ಮಾಡುವುದರಿಂದ ಮಾತ್ರ ಯಾವುದೇ ಬದಲಾವಣೆ ಬರುವುದಿಲ್ಲ. ಸೆನ್ಸಾರ್ ಬೋರ್ಡ್ ನಿಯಮಗಳ ಪ್ರಕಾರ, ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುವುದು, ಅವರನ್ನು ಅಶ್ಲೀಲ ಭಾಷೆಯಲ್ಲಿ ಚಿತ್ರಿಸುವುದು ಅಥವಾ ದ್ವಿಮುಖ ನುಡಿಗಟ್ಟುಗಳನ್ನು ಬಳಸುವುದು ಕಾನೂನುಬಾಹಿರವಾಗಿದೆ. ಆದರೆ ಇವುಗಳಿಲ್ಲದೆ ಬಿಡುಗಡೆಯಾಗುವ ಚಿತ್ರಗಳು ಬಹಳ ಕಡಿಮೆ. ಸೆನ್ಸಾರ್ ಮಂಡಳಿಯು ಸಾಮಾನ್ಯವಾಗಿ ಇಂತಹ ವಿಷಯಗಳ ಬಗ್ಗೆ ಗಮನ ಹರಿಸದೇ ಪ್ರಮಾಣಪತ್ರ ನೀಡುತ್ತದೆ ಎಂಬುದನ್ನು ಸಹ ಗಮನಿಸಬೇಕು. ಆದ್ದರಿಂದ, ಸೆನ್ಸಾರ್ ಮಂಡಳಿಯನ್ನು ವಿಸರ್ಜಿಸಬೇಕು. ಅಲ್ಲಿಯವರೆಗೆ, ಅದನ್ನು ರಾಜಕೀಯ ಅಸ್ತ್ರವಾಗಿ ಬಳಸುವುದನ್ನು ನಾವು ಬಲವಾಗಿ ವಿರೋಧಿಸಬೇಕು,” ಎಂದು ಪೋಸ್ಟ್ ಮಾಡಿದ್ದಾರೆ.

ನಾಮ್ ತಮಿಳರ್ ಪಕ್ಷದ ನಾಯಕ ಸೀಮಾನ್

ಪ್ರಮಾಣಪತ್ರ ನೀಡಬಹುದು!
ಅದೇ ರೀತಿ, ನಾಮ್ ತಮಿಳರ್ ಕಚ್ಚಿಯ ಸೀಮಾನ್ ಕೂಡ ನಿನ್ನೆ (ಜನವರಿ 7) ಪತ್ರಿಕಾಗೋಷ್ಠಿಯಲ್ಲಿ, ವಿಜಯ್ ಅವರನ್ನು ಬೆಂಬಲಿಸಿ ಮಾತನಾಡಿದ್ದರು. ಅಂದರೆ, “ಜನನಾಯಗನ್ ಚಿತ್ರಕ್ಕೆ ಯಾವುದಾದರೂ ಒಂದು ರೀತಿಯ ಪ್ರಮಾಣಪತ್ರ ನೀಡಬಹುದು. ನಾನು ಅದರ ತೆಲುಗು ಆವೃತ್ತಿಯನ್ನು ನೋಡಿದ್ದೇನೆ. ಅದರಲ್ಲಿ ವಿಮರ್ಶಾತ್ಮಕವಾದದ್ದು ಏನೂ ಇಲ್ಲ. ಸೆನ್ಸಾರ್ ಪ್ರಮಾಣಪತ್ರ ನೀಡಲು ಅದನ್ನು ಇಷ್ಟೊಂದು ಎಳೆಯುವ ಅಗತ್ಯವಿಲ್ಲ” ಎಂದು ವಿಜಯ್ ಅವರನ್ನು ಬೆಂಬಲಿಸಿ ಮಾತನಾಡಿದ್ದರು ಎಂಬುದು ಗಮನಾರ್ಹ.

Tags: CBFCCensor BoardJanamayaganVijayಜನನಾಯಗನ್ನಟ ವಿಜಯ್ಸೆನ್ಸಾರ್ ಬೋರ್ಡ್
Previous Post

ಕಾಸರಗೋಡಿನ ಕನ್ನಡಿಗರ ಆತಂಕ: ಮಲಯಾಳಂ ಕಡ್ಡಾಯ ಮಸೂದೆ ವಿರೋಧಿಸಿ ರಾಜ್ಯಪಾಲರಿಗೆ ಕರ್ನಾಟಕ ನಿಯೋಗ ಮನವಿ

Next Post

ಮಗನನ್ನು ಕಳೆದುಕೊಂಡ ನೋವು… ಕಣ್ಣೀರಿನಲ್ಲಿ ಕರಗಿದ ಸ್ಟರ್ಲೈಟ್ ಮಾಲೀಕ: ಆದಾಯದ 75% ಸಮಾಜ ಕಲ್ಯಾಣಕ್ಕೆ!

Next Post

ಮಗನನ್ನು ಕಳೆದುಕೊಂಡ ನೋವು... ಕಣ್ಣೀರಿನಲ್ಲಿ ಕರಗಿದ ಸ್ಟರ್ಲೈಟ್ ಮಾಲೀಕ: ಆದಾಯದ 75% ಸಮಾಜ ಕಲ್ಯಾಣಕ್ಕೆ!

Stay Connected test

  • 24k Followers
  • 99 Subscribers
  • Trending
  • Comments
  • Latest

ಜಾತಿಯೇ ಇಲ್ಲದಿದ್ದರೆ, ನೀವೆಲ್ಲರೂ ಯಾರು? – ಫುಲೆ ಚಿತ್ರದ ವಿಚಾರವಾಗಿ ಅನುರಾಗ್ ಗರಂ!

18/04/2025

Harvest Festival: ಕೊತ್ತನೂರು CSI ಸಭೆಯಲ್ಲಿ ಅದ್ದೂರಿಯಾಗಿ ನಡೆದ ಸುಗ್ಗಿ ಉತ್ಸವ!

13/10/2025

ಕೆ.ಆರ್.ಪುರಂ ಕ್ಷೇತ್ರಕ್ಕೆ ಬಂದಿದ್ದ ಸುಮಾರು 5000 ಸಾವಿರ ಕೋಟಿ ರೂ.ಗಳು ಏನಾದವು? ಎಂದು ನನಗೆ ಯಕ್ಷ ಪ್ರಶ್ನೆಯಾಗಿದೆ: ಸಚಿವ ಬೈರತಿ ಸುರೇಶ್

28/10/2025
ಚುನಾವಣಾ ಅಭ್ಯರ್ಥಿಗಳು ಇನ್ನು ಮುಂದೆ ಗುಂಪು ಸೇರಿಸಿ ಮೆರವಣಿಗೆ ನಡೆಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿಲ್ಲ. ಆನ್ಲೈನ್ನಲ್ಲಿ ನಾಮಪತ್ರಗಳನ್ನು ಸಲ್ಲಿಸುವ ಸಲುವಾಗಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ನಾಮಪತ್ರ ಸಲ್ಲಿಕೆ ಆನ್‌ಲೈನ್‌ನಲ್ಲಿ ಮಾತ್ರ; ಗದ್ದಲಕ್ಕೆ ಅಂತ್ಯ ಹಾಡಿದ ಚುನಾವಣಾ ಆಯೋಗ!

24/07/2025

ಫಿಪ ವಿಶ್ವಕಪ್ ಫುಟ್ ಬಾಲ್ ಫೈನಲ್:

0

‘ಶ್ರೀ.ಸಿದ್ದಗಂಗಾ ಸಿರಿ ಪ್ರಶಸ್ತಿ’

0

ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಪುಂಡಾಟಿಕೆ!

0

ಕೊರೊನಾ ಆರ್ಭಟಕ್ಕೆ ಚೀನಾ ತತ್ತರ…!

0

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026

ಪಬ್-ಬಾರ್ ಪ್ರವೇಶಕ್ಕೆ ಗುರುತಿನ ಚೀಟಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

08/06/2026

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಿಹಿ ಸುದ್ದಿ: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ-2025 ಶೀಘ್ರದಲ್ಲೇ ಜಾರಿ

07/06/2026
Dynamic Leader | ಡೈನಾಮಿಕ್ ಲೀಡರ್

DYNAMIC LEADER is a popular online Kannada newsportal, going source for technical and digital content for its influential audience around the globe.

Follow Us

Browse by Category

  • ಆರೋಗ್ಯ
  • ಇತರೆ ಸುದ್ಧಿಗಳು
  • ಉದ್ಯೋಗ
  • ಕ್ರೀಡೆ
  • ಕ್ರೈಂ ರಿಪೋರ್ಟ್ಸ್
  • ದೇಶ
  • ಬೆಂಗಳೂರು
  • ರಾಜಕೀಯ
  • ರಾಜ್ಯ
  • ಲೇಖನ
  • ವಿದೇಶ
  • ಶಿಕ್ಷಣ
  • ಸಂಪಾದಕೀಯ
  • ಸಿನಿಮಾ

You can reach us via email or phone.

ನಮ್ಮ ಸಂಪರ್ಕ: ಡಿ.ಸಿ.ಪ್ರಕಾಶ್, ಸಂಪಾದಕರು
ಫೋನ್ / ವಾಟ್ಸಾಪ್: +91-9741553161
ಈ-ಮೇಲ್: dynamicleaderdesk@gmail.com

Recent News

ಶಬರಿಮಲೆ: ದಪ್ಪ ಲೇಪಿತ ಚಿನ್ನವನ್ನು ಕದ್ದು ತೆಳುವಾದ ಲೇಪನ ಮಾಡುವ ಮೂಲಕ ವಂಚನೆ; ಪ್ರಯೋಗಾಲಯ ಪರೀಕ್ಷೆಯಲ್ಲಿ ಆಘಾತಕಾರಿ ಸಂಗತಿ

12/06/2026

ಆರ್‌ಎಸ್‌ಎಸ್‌ಗೆ ಕಾನೂನು ವಿನಾಯಿತಿ ಇದೆಯೇ? ದಾಖಲೆ ತೋರಿಸಿ: ಪ್ರಿಯಾಂಕ್ ಖರ್ಗೆ ಸವಾಲು

11/06/2026
  • Site Terms
  • Privacy
  • Advertisement
  • Cookies Policy
  • Contact Us

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS

No Result
View All Result
  • ಮುಖಪುಟ
  • ಬೆಂಗಳೂರು
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಶಿಕ್ಷಣ
  • ಉದ್ಯೋಗ
  • ಆರೋಗ್ಯ
  • ಲೇಖನ
  • ಸಂಪಾದಕೀಯ

Copyrights © 2019 - 26 by Dynamic Leader | ಡೈನಾಮಿಕ್ ಲೀಡರ್ | Designed by: DIGICUBE SOLUTIONS